ಕಾಮಧೇನು ಕ್ಷೇತ್ರ
ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಮನದಾಳದ ನೋವುಗಳನ್ನು ಹಾಗೂ ತನ್ನ ಭಾವನೆಗಳನ್ನು ಹಂಚಿಕೊಳ್ಳಲು ಅವರಿಗೆ ಇಷ್ಟವಾದ ಹಾಗೂ ಅವರ ಮನಸ್ಸನ್ನು ಅರಿತುಕೊಂಡಿರುವ ವ್ಯಕ್ತಿಯೂ ಬೇಕು . ಆದರೆ ದುರದೃಷ್ಟವಶಾತ್ ಇದು ಎಲ್ಲರಿಗೂ ಸಿಗುವಂಥದ್ದಲ್ಲ, ಇದರಿಂದ ಸಾಕಷ್ಟು ಮನೆ ಮನೆಗಳು ಗಾಜಿನ ಚೂರಿನಂತೆ ಛಿದ್ರಗೊಂಡಿದೆ ಮತ್ತು ತಮ್ಮಗಳ ಅನುಭವ ಆಗುವ ಅನುಭಾವಗಳಿಂದ ಒಂದುಗೂಡಲು ತಮ್ಮಗಳ ತಪ್ಪಿನ ಅರಿವಿನಿಂದ ಸೋತು ಗೆಲ್ಲಲು ಸಾಧ್ಯವಾಗದೆ ಅತಂತ್ರ ಜೀವನವನ್ನು ಅನುಭವಿಸುತ್ತಿರುವುದು ಈ ಸಮಾಜದಲ್ಲಿ ನಾವೆಲ್ಲ ನೋಡುತ್ತಿದ್ದೇವೆ. ಬದುಕಲು ಆಗದೆ , ಬಾಳಲು ಆಗದೆ ಬಾವಿಯನ್ನು ಸೇರುತ್ತಿರುವುದು ಸತ್ಯ ಸಂಗತಿಯಾಗಿದೆ.
ಇಂತಹ ಸಂದಿಗ್ಧ ಪರಿಸ್ಥಿತಿಗಳನ್ನು ಸಮಾಜದಲ್ಲಿ ಜನರು ಅನುಭವಿಸುತ್ತಿರುವುದನ್ನು ನನಗೆ ಬುದ್ಧಿ ಬಂದಾಗಿನಿಂದಲೂ ನೋಡುತ್ತಾ ಕೇಳುತ್ತಾ ಬಂದೆ . ನಮ್ಮ ಮನೆಯಲ್ಲಿ ತುಂಬು ಕುಟುಂಬ . ಅನಾರೋಗ್ಯದ ತಂದೆ ಮದುವೆಗೆ ನಿಂತ ಮೂರು ಜನ ಅಕ್ಕಂದಿರು ಉದ್ಯೋಗವಿಲ್ಲದ ಮನೆಯಲ್ಲಿ ಕಾಲ ಕಳೆಯುತ್ತಿರುವ ಇಬ್ಬರು ಅಣ್ಣಂದಿರು ಎಲ್ಲವನ್ನು ಸಂಯಮ ಸಮಾಧಾನದಿಂದ ಜಗಳ ಕದನ ಮಾಡಬೇಕು ಎಲ್ಲಾ ಮಕ್ಕಳಿಗೂ ದೈವ ಕೃಪಾ ಸಂಪನ್ನ ರಾಗುವಂತೆ ಮಾರ್ಗದರ್ಶನ ತೋರಿಸುತ್ತಾ ಪ್ರತಿ ಗುರುವಾರವು ಶ್ರೀರಾಯರ ಭಾವಚಿತ್ರಕ್ಕೆ 25 ನಮಸ್ಕಾರಗಳನ್ನು ಅಂದಿನಿಂದ ಇಂದಿನವರೆಗೂ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಸಾತ್ವಿಕ ಹೃದಯ. ಎಲ್ಲರನ್ನೂ ನಮ್ಮವರೆಂದೇ ಭಾವಿಸುತ್ತಿರುವ ನನ್ನ ಮಾತೃ ಹೃದಯ ಅಮ್ಮನ ಗುಣಲಕ್ಷಣಗಳು.
ಸೇವೆಯನ್ನು ಬುಕ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಮಾರ್ಗದರ್ಶನವನ್ನು ಪಡೆಯಲು ಕೆಳಗೆ ಕ್ಲಿಕ್ ಮಾಡಿ
ಅಂಚೆ ವಿಳಾಸ
ಕಾಮಧೇನು ಕ್ಷೇತ್ರ
ಕಮ್ಮಸಂದ್ರ ಮುಖ್ಯ ರಸ್ತ
ಲಕ್ಷ್ಮೀಪುರ ಪೋಸ್ಟ್
ದಾಸನಪುರ ಹೋಬಳಿ
ಬೆಂಗಳೂರು - 562123
ಸಾಮಾಜಿಕ ಜಾಲತಾಣ ಲಿಂಕ್ಗಳು
ದೇವಸ್ಥಾನ ತೆರೆಯುವ ಅವಧಿಗಳು
ಭಾನುವಾರ | '8:00 A.M - 7:30 P.M |
---|---|
ಸೋಮವಾರ | 8:30 A.M - 5:30 P.M |
ಮಂಗಳವಾರ | 8:30 A.M - 5:30 P.M |
ಬುಧವಾರ | 8:30 A.M - 5:30 P.M |
ಗುರುವಾರ | 6:30 A.M - 8:30 P.M |
ಶುಕ್ರವಾರ | 8:30 A.M - 5:30 P.M |
ಶನಿವಾರ | 8:30 A.M - 5:30 P.M |
ಅನ್ನದಾನ ಸಮಯ
ಗುರುವಾರ | '10:30 A.M - 3:30 P.M |
---|---|
ಭಾನುವಾರ | '10:30 A.M - 3:30 P.M |